ಪ್ರಾಚೀನ ಭಾರತದ ಇತಿಹಾಸದಲ್ಲಿ ಶಾಸನಗಳು
ಶ್ರೀಮತಿ ಸಜೀಲ
ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ
ಎಸ್.ಎಂ.ಬಿ.ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ನರೇಗಲ್, ಗದಗ ಜಿ||
Email: sajeela.hassan@gmail.com, Ph 7760905785
ಪೀಠಿಕೆ
ಆಧಾರವಿಲ್ಲದೆ ಇತಿಹಾಸವಿಲ್ಲ. ಆಧಾರಗಳೆ ಇತಿಹಾಸ ರಚನೆಗೆ ಅಡಿಗಲ್ಲು, ಆಧಾರವಿಲ್ಲದೆ ಇತಿಹಾಸವನ್ನು ಹೇಳಲು ಹೊರಟರೆ ಅದು ಕಟ್ಟು ಕಥೆಯಾಗುತ್ತದೆ. ಆದ್ದರಿಂದಲೇ ಒಂದು ದೇಶದ ಚರಿತ್ರೆ ರಚನೆಗೆ ಆಧಾರಗಳ ಅಧ್ಯಯನ ಅತ್ಯಂತ ಅವಶ್ಯಕ. ನಮ್ಮ ಭಾರತದ ಇತಿಹಾಸದಲ್ಲಿ ಪ್ರಾಚೀನ ಭಾರತದ ಇತಿಹಾಸದ ಪರಿಚಯ ನಮಗೆಲ್ಲ ಅವಶ್ಯಕ. ಪ್ರಾಚೀನ ಭಾರತದ ಇತಿಹಾಸ ಭವ್ಯ ಮತ್ತು ಬಹುಮುಖವಾದುದು, ನಮ್ಮ ಸಂಸ್ಕೃತಿ, ನಾಗರಿಕತೆ, ಅವರುಗಳು ಅನುಸರಿಸುತ್ತಿದ್ದ ಕಸುಬುಗಳು, ಸಾಮಾಜಿಕ ಪದ್ಧತಿ, ಭಾಷೆ, ಲಿಪಿ ಇವುಗಳು ರೂಪುಗೊಂಡ ಬಗೆ ಇವುಗಳನ್ನು ತಿಳಿಸುತ್ತದೆ. ಕಲ್ಲು ಬಂಡೆಗಳ ಮೇಲೆ, ದೇವಾಲಯದ ಗೋಡೆಗಳ ಮೇಲೆ, ಸ್ಥಂಭಗಳ ಮೇಲೆ, ಗುಹಾಲಯಗಳಲ್ಲಿ ತಾಮ್ರದ ಹಲಗೆ, ಬೆಳ್ಳಿ, ಕಂಚು ಬಂಗಾರದ ತಗಡುಗಳ ಮೇಲೆ ಕೆತ್ತಲಾಗಿದೆ. ಪ್ರಾಚೀನ ಭಾರತದ ಇತಿಹಾಸ ರಚನೆಗೆ ಶಾಸನಗಳು ಬಹು ಮಖ್ಯ ಆಧಾರಗಳು. ಇತಿಹಾಸದ ಪುನರ್ನಿಮಾಣದಲ್ಲಿ ಶಾಸನಗಳು ನಂಬಲರ್ಹ ಮಾಹಿತಿಗಳನ್ನು ಒದಗಿಸುತ್ತದೆ. ಬ್ರಾಹ್ಮಿ, ಖರೋಷ್ಠಿ, ದೇವನಾಗರಿ ಲಿಪಿಗಳಲ್ಲಿ ಪ್ರಾಕೃತ, ಪಾಳಿ, ಸಂಸ್ಕೃತ, ಕನ್ನಡ ಮುಂತಾದ ಭಾಷೆಗಳಲ್ಲಿ ಶಾಸನಗಳು ಕೆತ್ತಲ್ಪಟ್ಟಿವೆ . ರಾಜಕೀಯ, ಸಾಮ್ರಾಜ್ಯದ ಗಡಿ, ಧಾರ್ಮಿಕತೆ, ವಂಶಾನುಕ್ರಮಣಿಕೆ, ದಾನ-ದತ್ತಿ, ಅಭಿವೃಧ್ದಿ ಕಾರ್ಯಗಳು, ಸಂಸ್ಕೃತಿ ನಂಬಲರ್ಹ ಮಾಹಿತಿಗಳನ್ನು ಒದಗಿಸುತ್ತದೆ. ಆದರೆ ಪ್ರಾಚೀನ ಭಾರತದ ಇತಿಹಾಸ ರಚನೆ ಅಷ್ಟು ಸುಲಭವಲ್ಲ ಅತಿ ಹೆಚ್ಚಿನ ಪ್ರಯತ್ನ ಅವಶ್ಯಕ. ಪ್ರಾಚೀನ ಇತಿಹಾಸವನ್ನು ರಚಿಸಲು ಮಾಹಿತಿಗಳು ಹಲವು ಮೂಲಗಳಿಂದ ದೊರೆಯುತ್ತದೆ ಅವುಗಳನ್ನು ಕಲೆಹಾಕಿ ಇತಿಹಾಸಕಾರ ಇತಿಹಾಸವನ್ನು ಬರೆಯ ಬೇಕಾಗುತ್ತದೆ.
ಪ್ರಾಚೀನ ಭಾರತದ ಇತಿಹಾಸ ರಚನೆಗೆ ಶಾಸನಗಳು
ಪ್ರಾಚೀನ ಬಾರತದಲ್ಲಿ ಹೆರೊಡೋಟಸ್, ಥುಸಿಡೈಡ್ಸ್, ಲೆವಿ ಇವರುಗಳಂತಹ ಇತಿಹಾಸಕಾರರಿರಲಿಲ್ಲವಾದರೂ ಪುರಾಣಗಳಲ್ಲಿ ನಮ್ಮ ಇತಿಹಾಸ ಅಡಗಿದ್ದನ್ನು ಕಾಣಬಹುದು. ಪುರಾಣಗಳು ವಿಶ್ವಕೋಶದಂತಿದ್ದು, ಗುಪ್ತ ಆಳ್ವಿಕೆಯ ಆರಂಭದವರೆಗಿನ ರಾಜವಂಶದ ಇತಿಹಾಸವನ್ನು ತಿಳಿಸುತ್ತದೆ. ಆದರೂ ಘಟನೆಗಳು ನಡೆದ ನಂತರ ಅವುಗಳು ದಾಖಲಾಗಿರುವುದರಿಂದ, ಪ್ರಾಚೀನ ಭಾರತದ ಇತಿಹಾಸ ರಚನೆಗೆ ಶಾಸನಗಳು ಬಹು ಮಖ್ಯ ಆಧಾರಗಳು. ಇತಿಹಾಸದ ಪುನರ್ನಿಮಾಣದಲ್ಲಿ ಶಾಸನಗಳು ನಂಬಲರ್ಹ ಮಾಹಿತಿಗಳನ್ನು ಒದಗಿಸುತ್ತದೆ.
ಶಾಸನ ಲಿಖಿತ ರೂಪದ ದಾಖಲೆ, ಉದ್ದೇಶವೊಂದರ ಸಲುವಾಗಿ
ಪ್ರಾಚೀನ ಕಾಲದ ರಾಜರು ತಮ್ಮ ಸಾಧನೆಗಳನ್ನು ತಮ್ಮ ಮುಂದಿನ ಪೀಳಿಗೆಗೆ ತಿಳಿಯ ಪಡಿಸಲು, ಪ್ರಾಚೀನ ಭಾರತದ ಇತಿಹಾಸ ರಚನೆಗೆ ಶಾಸನಗಳು ಬಹು ಮಖ್ಯ ಆಧಾರಗಳು. ಇತಿಹಾಸದ ಪುನರ್ನಿಮಾಣದಲ್ಲಿ ಶಾಸನಗಳು ನಂಬಲರ್ಹ ಮಾಹಿತಿಗಳನ್ನು ಒದಗಿಸುತ್ತದೆ ಆಗಿನ
ಮುಂತಾದ ಮಾಹಿತಿಗಳು ಶಾಸನಗಳಿಂದ ಲಭ್ಯವಾಗುತ್ತದೆ.
ಶಾಸನಗಳ ಅಧ್ಯಯನ- ಶಾಸನ ಶಾಸ್ತ್ರ
ಶಾಸನಗಳ ಅಧ್ಯಯನವೇ ಶಾಸನ ಶಾಸ್ತ್ರ ಹಾಗೂ ಹಳೆಯ ದಾಖಲಾತಿಗಳ ಬರವಣಿಗೆಯ ಅಧ್ಯಯನವನ್ನು ಲಿಪಿ ಶಾಸ್ತ್ರ ಎಂದು ಕರೆಯುತ್ತಾರೆ. ಬ್ರಾಹ್ಮಿ, ಖರೋಷ್ಠಿ, ದೇವನಾಗರಿ ಲಿಪಿಗಳಲ್ಲಿ ಪ್ರಾಕೃತ, ಪಾಳಿ, ಸಂಸ್ಕೃತ, ಕನ್ನಡ ಮುಂತಾದ ಭಾಷೆಗಳಲ್ಲಿ ಶಾಸನಗಳು ಕೆತ್ತಲ್ಪಟ್ಟಿವೆ.
ಖರೋಷ್ಠಿ ಲಿಪಿ
ಖರೋಷ್ಠಿ ಲಿಪಿಯು ಭಾರತದ ವಾಯುವ್ಯ ಭಾಗಕ್ಕೆ ಸೀಮಿತಗೊಳಿಸಲಾಗಿದೆ. ಈ ಲಿಪಿಯು ಬಹುಶಃ ಅರಾಮಿಕ್ ಲಿಪಿಯಿಂದ ಹುಟ್ಟಿಕೊಂಡಿರಬಹುದು ಎಂದು ನಂಬಲಾಗಿದೆ. ಪ್ರಾಚೀನ ಭಾರತದ ವಾಯುವ್ಯ ಭಾಗದಲ್ಲಿ ಅಕೆಮೆನಿಡ್ ಆಳ್ವಿಕೆಯಲ್ಲಿ ಈ ಲಿಪಿಯನ್ನು ಪರಿಚಯಿಸಲಾಯಿತು. ಈ ಲಿಪಿಯು ಬಲದಿಂದ ಎಡಕ್ಕೆ ಬರೆಯುವ ದಿಕ್ಕನ್ನು ಅವಲಂಭಿಸಿರುತ್ತದೆ.
ಬ್ರಾಹ್ಮಿ ಲಿಪಿ
ಬ್ರಾಹ್ಮಿ ಲಿಪಿಯು ವಿಶ್ವದ ಪ್ರಮುಖ ಬರವಣಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ. ಈ ಲಿಪಿಯು ಕ್ರಿ.ಪೂ 5ನೇ ಶತಮಾನದ ಹೊತ್ತಿಗಾಗಲೇ ಭಾರತದಲ್ಲಿ ಕಾಣಿಸಿ ಕೊಂಡಿತ್ತು. ಆದರೆ ಆರಂಭಿಕ ಗ್ರಂಥಗಳಲ್ಲಿಯೂ ಸಹ ಇದು ಅನೇಕ ಸ್ಥಳೀಯ ರೂಪಾಂತರಗಳನ್ನು ಹೊಂದಿತ್ತು ಎಂಬ ಅಂಶವು ಅದರ ಮೂಲ ಸಮಯಕ್ಕಿಂತ ಹಿಂದಿದೆ ಎಂದು ಸೂಚಿಸುತ್ತದೆ. ಈ ಲಿಪಿಯು ಎಡದಿಂದ ಬಲಕ್ಕೆ ಬರೆಯುವ ಕ್ರಮವಾಗಿದ್ದು, ಸೆಮೆಟಿಕ್ ಲಿಪಿಯಿಂದ ಬಂದಿತೆಂದು, ಹರಪ್ಪ-ಮೊಹೆಂಜೊದಾರೋ ಲಿಪಿಯಿಂದ ಬಂದಿತೆಂದು, ತಾಂತ್ರಿಕ ಬೀಜಾಕ್ಷರಗಳಿಂದ ಬಂದಿತೆಂದು ವಾದಿಸುತ್ತಾರೆ. ಕ್ರಿ.ಶ 1837-38 ರಲ್ಲಿ ಜೇಮ್ಸ್ ಪ್ರಿನ್ಸೆಪ್ ಬ್ರಾಹ್ಮೀ ಲಿಪಿಯನ್ನು ಸಮರ್ಪಕವಾಗಿ ಪೂರ್ತಿ ಓದಿದನು.
ಶಾಸನಗಳ ವರ್ಗೀಕರಿಣಿ
ಶಾಸನಗಳನ್ನು ಶಿಲಾಶಾಸನ ಮತ್ತು ತಾಮ್ರ ಶಾಸನ ಎಂದು ಎರಡು ವಿಧಗಳಾಗಿ ವರ್ಗೀಕರಿಸಲಾಗಿದೆ. ಅವುಗಳನ್ನು
ದಾನಶಾಸ- ದಾನಶಾಸನಗಳಲ್ಲಿ
ಹೀಗೆ ಸ್ಥಳೀಯವಾಗಿ ಹಲವಾರು ವಿಧಗಳಿರುವುದನ್ನು ಕಾಣಬಹುದು. ಭಾರತದ ಬಹು ಪಾಲು ಶಾಸನಗಳು ದಾನ ಶಾಸನಗಳಾಗಿವೆ. ಅಲ್ಲದೇ ನಿಷೀದಿಗೆ, ವೀರಗಲ್ಲುಗಳು, ಮಾಸ್ತಿಗಲ್ಲುಗಳು, ಹೀಗೆ ಹಲವಾರು ವಿಧಗಳಾಗಿ ವಿಂಗಡಿಸ ಬಹುದಾಗಿದೆ.
ಸಿಂಧೂ ನಾಗರೀಕತೆ ಶಾಸನಗಳು- ಪ್ರಾಚೀನ ಶಾಸನಗಳಲ್ಲಿ ಸಿಂಧೂ ನಾಗರೀಕತೆ ಶಾಸನಗಳು ಬಹು ಪ್ರಾಚೀನವಾದವು. ಅವು ಚಿತ್ರ ಲಿಪಿಗಳಾದ್ದರಿಂದ ಓದಲು ಸಾಧ್ಯವಾಗಿಲ್ಲ. ಸೊಹ್ಗಾರ್ ಶಾಸನ ಭಾರತದ ಶಾಸನಗಳಲ್ಲೇ ಅತಿ ಪ್ರಾಚೀನ ಶಾಸನವಾಗಿದ್ದು ಇದನ್ನು ಅಶೋಕನ ಶಾಸನಗಳಿಗಿಂತ 50 ವರ್ಷಗಳಷ್ಟು ಹಳೆಯದೆಂದು ನಂಬಲಾಗಿದೆ. ಆದರೆ ಕ್ರಿ.ಪೂ 3ನೇ ಶತಮಾನದ ಅಶೋಕನ ಶಾಸನಗಳು ಓದಲಾದ ಭಾರತದ ಅತೀ ಪ್ರಾಚೀನ ಶಾಸನಗಳು. ಭಾರತದಲ್ಲಿ ಅಸಂಖ್ಯಾತವಾದ ಶಾಸನಗಳು ದೊರುಕುತ್ತವೆ ಸುಮಾರು 85000ಕ್ಕೂ ಹೆಚ್ಚು ಶಾಸನಗಳು ಲಭ್ಯವಾಗಿದೆ. ಬಹುಪಾಲು ತಮಿಳುನಾಡಿನಲ್ಲೂ, ಎರಡನೇಯದಾಗಿ ಅತೀ ಹೆಚ್ಚು ಶಾಸನಗಳು ಕರ್ನಾಟಕದಲ್ಲೂ ಲಭ್ಯವಾಗಿವೆ.
ಅಶೋಕನ ಶಾಸನಗಳು - ಪ್ರಾಚೀನ ಭಾರತದ ಕೆಲವು ಪ್ರಮುಖ ಶಾಸನಗಳೆಂದರೆ,ಶಿಲಾ ಶಾಸನಗಳ ಪಿತಾಮಹಾ, ಸ್ವ ಇತಿಹಾಸಕಾರ ಎನ್ನಿಸಿಕೊಂಡ ಸಾಮ್ರಾಟ್ ಅಶೋಕನ ಶಾಸನಗಳು ಭಾರತದ ವಿವಿಧ ಮೂಲೆಗಳಲ್ಲೂ ದೊರೆತ್ತಿದ್ದು
ಶಕ ದೊರೆ ರುದ್ರದಾಮನ ಗುಜರಾತಿನ ಜುನಾಘಡದ ಗಿರ್ನಾರ್ ಶಾಸನ - ಶಕ ದೊರೆ ರುದ್ರದಾಮನ ಗುಜರಾತಿನ ಜುನಾಘಡದ ಗಿರ್ನಾರ್ ಶಾಸನ ಕ್ರಿ.ಶ ಎರಡನೇಯ ಶತಮಾನದ ಮಧ್ಯದಲ್ಲಿ ಬರೆದ ಪರಿಶುದ್ಧ ಸಂಸ್ಕೃತದ ಆರಂಭಿಕ ಉದಾಹರಣೆಯೆಂದು ಪರಿಗಣಿಸಲಾಗಿದೆ. ಸುದರ್ಶನ ಕೆರೆಯ ಮೌರ್ಯರ ರಾಜ್ಯಪಾಲ ವೈಶ್ಯ ಪುಷ್ಯಗುಪ್ತನು ನಿರ್ಮಾಣ ಮಾಡಿದನೆಂದು ಹಾಗೂ ರುದ್ರದಾಮನಿಂದ ಜೀರ್ಣೋದ್ದಾರ ಆದ ಬಗ್ಗೆ ಮಾಹಿತಿ ನೀಡುತ್ತದೆ.
ಹೀಗೆ ಸಾಕಷ್ಟು ಶಾಸನಗಳು ಲಭ್ಯವಾಗಿದ್ದು ಶಾಸನಗಳು ಎಂಬ ಬೇರುಗಳಿಂದ ಇತಿಹಾಸವೆಂಬ ಪುಷ್ಪ ಅರಳಿದೆ ಎಂಬ ಚರಿತ್ರಕಾರನ ಮಾತು ಸತ್ಯವಾಗಿದೆ.
ಶಾಸನಗಳ ಸಂರಕ್ಷಿಣನೆ
ಭಾರತದಲ್ಲಿ ಲಭ್ಯವಾದ ಶಾಸನಗಳನ್ನು ದೇಶದ ಹಲವು ಮ್ಯೂಸಿಯಂಗಳಲ್ಲಿ ಸಂರಕ್ಷಿಸಿಡಲಾಗಿದೆ. ಪ್ರಾಚೀನ ಭಾರತದ ಇತಿಹಾಸ ಅಧ್ಯಯನಕ್ಕೆ ಲಭ್ಯವಾದ ಶಾಸನಗಳನ್ನು ಸಂಗ್ರಹಿಸಿ ಎಪಿಗ್ರಾಫಿಯ ಆಫ್ ಕರ್ನಾಟಕ, ಎಫಿಗ್ರಾಫಿಯ ಆಫ್ ಇಂಡಿಯಾ ಎಂಬ ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಮೌರ್ಯರು ಮತ್ತು ಗುಪ್ತರ ಕಾಲದ ಶಾಸನಗಳನ್ನು ಕಾರ್ಪಸ್ ಇನ್ಸ್ಕ್ರಿಪ್ಷನ್ ಇಂಡಿಕಾರಂ ಎಂಬಲ್ಲಿನ ಪ್ರಕಟಿಸಲಾಗಿದೆ.
ಆದರೆ ಶಾಸನಗಳಲ್ಲಿ ದೋಷಗಳಿಲ್ಲ ಎಂದಲ್ಲ ಕೆಲವೊಂದು ಶಾಸನಗಳು ಹೊಗಳಿಕೆಗಳಿಂದಲೂ, ಕೆಲವು ಕೂಟ ಶಾಸನಗಳು, ಉತ್ಪ್ರೇಕ್ಷಿತ ಅಂಶಗಳು, ಶಾಸನಗಳ ಲಿಪಿ, ಭಾಷೆ ಓದಲು ಸಾಧ್ಯವಾಗದೇ ಇರುವುದು, ಹೀಗೆ ಇತಿಹಾಸಕಾರ ಇತಿಹಾಸವನ್ನು ರಚಿಸುವಾಗ ಎಚ್ಚರಿಕೆಯಿಂದ ಕೂಲಂಕಶವಾಗಿ ಪರಿಶೀಲಿಸಿ, ವಿಮರ್ಶಿಸಿ ರಚಿಸ ಬೇಕಾಗಿರುತ್ತದೆ.
ಆದರೆ ಪ್ರಾಚೀನ ಭಾರತದ ಇತಿಹಾಸ ರಚನೆ ಅಷ್ಟು ಸುಲಭವಲ್ಲ ಅತಿ ಹೆಚ್ಚಿನ ಪ್ರಯತ್ನ ಅವಶ್ಯಕ. ಪ್ರಾಚೀನ ಇತಿಹಾಸವನ್ನು ರಚಿಸಲು ಮಾಹಿತಿಗಳು ಹಲವು ಮೂಲಗಳಿಂದ ದೊರೆಯುತ್ತದೆ ಅವುಗಳನ್ನು ಕಲೆಹಾಕಿ ಇತಿಹಾಸಕಾರ ಇತಿಹಾಸವನ್ನು ಬರೆಯ ಬೇಕಾಗುತ್ತದೆ.
ಪ್ರಾಚೀನ ಭಾರತದ ಇತಿಹಾಸ ಅಧ್ಯಯನಕ್ಕೆ ಲಭ್ಯವಾದ ಶಾಸನಗಳನ್ನು ಸಂಗ್ರಹಿಸಿ
ಅವುಗಳನ್ನು ಕಲೆಹಾಕಿ ಇತಿಹಾಸಕಾರ ಇತಿಹಾಸವನ್ನು ಬರೆಯ ಬೇಕಾಗುತ್ತದೆ. ಹೀಗೆ ಇತಿಹಾಸಕಾರ ಇತಿಹಾಸವನ್ನು ರಚಿಸುವಾಗ ಎಚ್ಚರಿಕೆಯಿಂದ ಕೂಲಂಕಶವಾಗಿ ಪರಿಶೀಲಿಸಿ, ವಿಮರ್ಶಿಸಿ ರಚಿಸ ಬೇಕಾಗಿರುತ್ತದೆ. ಆದರೆ ಶಾಸನಗಳಲ್ಲಿ ದೋಷಗಳಿಲ್ಲ ಎಂದಲ್ಲ ಕೆಲವೊಂದು ಶಾಸನಗಳು ಹೊಗಳಿಕೆಗಳಿಂದಲೂ, ಕೆಲವು ಕೂಟ ಶಾಸನಗಳು, ಉತ್ಪ್ರೇಕ್ಷಿತ ಅಂಶಗಳು, ಶಾಸನಗಳ ಲಿಪಿ, ಭಾಷೆ ಓದಲು ಸಾಧ್ಯವಾಗದೇ ಇರುವುದು, ಹೀಗೆ ಇತಿಹಾಸಕಾರ ಇತಿಹಾಸವನ್ನು ರಚಿಸುವಾಗ ಎಚ್ಚರಿಕೆಯಿಂದ ಕೂಲಂಕಶವಾಗಿ ಪರಿಶೀಲಿಸಿ, ವಿಮರ್ಶಿಸಿ ರಚಿಸ ಬೇಕಾಗಿರುತ್ತದೆ.
ಆಧಾರ ಗ್ರಂಥಗಳು