ಅನ್ನಕೊಡುವ ಭೂಮಿ ತಾಯ - ಅನ್ನದಾತೆ
ಭೀಮಾಶಂಕರ ಮಕಣಿ
ಪ್ರಥಮ ಬಿ.ಕಾಂ., ಎ. ವಿಭಾಗ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು.
bheemashankarsm9901@gmail.com Ph: 9731194198
ಮಕ್ಕಳೇ ಮಕ್ಕಳೇ
ಮರೆಯಬೇಡಿ ಕೃಷಿಯನು
ಅನ್ನಕೊಡುವ ಭೂಮಿ ತಾಯ
ಸೇವೆ ಮಾಡಿ ಧನ್ಯರಾಗಿ
ಮಾರಬೇಡಿ ಭೂಮಿಯ
ಬೆವರು ಸುರಿಸಿ ದುಡಿಯಿರಿ
ಹಳ್ಳಿ ಬಿಟ್ಟು ನಗರ ಸೇರಿ
ಏಕೆ ನೀವು ಕೆಡುವಿರಿ
ಹಳ್ಳಿಯದು ನೈಜ ಜೀವನ
ಪಟ್ಟಣದ್ದು ಕೃತಕ ಜೀವನ
ಕಾಸು ಇದ್ದರಿಲ್ಲಿ ಬದುಕು
ಕೊಳ್ಳಬೇಕು ಗಾಳಿ ನೀರನೆಲ್ಲಾ
ಭೂಮಿ ನಂಬಿ ಬದುಕಿರಿ
ಕೈ ತುಂಬಾ ಗಳಿಸಿ ಧನ್ಯರಾಗಿರಿ
ಜಗಕೆ ಅನ್ನಕೊಡುವವರು ನೀವು
ಪಟ್ಟಣಕ್ಕೆ ಬಂದೇನು ಸಾಧಿಸುವಿರಿ ?