ಆಯುರ್ವೇದ ಸಸ್ಯಗಳ ಬಳಕೆ ಮತ್ತು ಪ್ರಾಮುಖ್ಯತೆ
ಮನೋಜ್ ಟಿ ಇ.
ಬಿ ಎಸ್ಸಿ, ದ್ವಿತೀಯ ವರ್ಷ(ಸಿಬಿಜೆಡ್)
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು
manojdhadha3839@gmail.com Ph: 9731713839
ಆಯುರ್ವೇದದಲ್ಲಿ ಬಳಸಲ್ಪಡುವ ಔಷಧೀಯ ಸಸ್ಯಗಳ ಬಗ್ಗೆ ತಿಳಿಸಬಯಸಿದ್ದೇನೆ. ಆಯುರ್ವೇದ ಚಿಕಿತ್ಸೆಗಳಲ್ಲಿ ಎಣ್ಣೆ ಮತ್ತಯ ಸಾಮಾನ್ಯ ಮಸಾಲೆಗಳು ಸೇರಿದಂತೆ ಗಿಡಮೂಲಿಕೆ ಮತ್ತು ಇತರೆ ಸಸ್ಯಗಲ ಮೇಲೆ ಅವಲಂಬಿತವಾಗಿದೆ. ಆಯುರ್ವೇದದಲ್ಲಿ 600 ಕ್ಕೂ ಹೆಚ್ಚು ಗಿಡಮೂಲಿಕೆಗಳು 250 ಕ್ಕೂ ಹೆಚ್ಚು ಒಂಟಿ ಸಸ್ಯ ಔಷಧಿಗಳನ್ನು ಸೇರಿಸಲಾಗಿದೆ.
ಕಪ್ಪು ಮೆಣಸು, ದಾಲ್ಚಿನ್ನಿ, ಅಲೋವೆರಾ, ಶ್ರೀಗಂಧ, ಸಾಫ್ಲವರ್ ಮುಂತಾದ ಗಿಡಮೂಲಿಕೆಗಳು ನೋವು ಗಾಯಗಳನ್ನು ಸರಿಪಡಿಸಲು ಬಳಸಲಾಗುತ್ತದೆ.
ಆಯುರ್ವೇದದಲ್ಲಿ ಬಳಸುವ ಕೆಲ ಗಿಡಮೂಲಿಕೆಗಳ ಪರಿಚಯ
ಏಲಕ್ಕಿ ಮತ್ತು ಕೊತ್ತಂಬರಿ ಮುಂತಾದ ಗಿಡಮೂಲಿಕೆಗಳು ಅವುಗಳ ಹಸಿವುಳ್ಳಗುಣಗಳಿಗೆ ಹೆಸರುವಾಸಿಯಾಗಿದೆ. ಅಲೋವೆರಾ, ಶ್ರೀಗಂಧ, ಆರಿಶಿನ, ಖರೆಕಾಸದ ನಂತಹಾ ಗಿಡ ಮೂಲಿಕೆಗಳು ನಂಜುನಿರೋಧಕವಾಗಿ ಬಳಸಲಾಗುತ್ತದೆ.
ತುಳಸಿ
ಆಯುರ್ವೇದ ಗ್ರಂಥಗಳಲ್ಲಿ ರಾಮ, ಕೃಷ್ಣ, ವನಾ, ಕರ್ಪೂರ ತುಳಸಿ ನಾಲ್ಕು ವಿಧಗಳು.
ತುಳಸಿಯನ್ನು ಚಹಾವಾಗಿ ತೆಗೆದುಕೊಳ್ಳಲಾಗುತ್ತದೆ.
ತುಳಸಿ ಎಣ್ಣೆಯನ್ನು ಕೀಟಗಳ ಮತ್ತು ಬ್ಯಾಕ್ಟೀರಿಯಾಗಳ ವಿರುದ್ದ ಬಳಸಲಾಗುತ್ತದೆ ಅದರ ಎಲೆಗಳ ರಸವು ಶೀತ ಜ್ವರವು, ಬ್ರಾಂಕೈಟೀಸ್, ಮತ್ತು ಕೆಮ್ಮು ನಿವಾರಣೆಯಲ್ಲಿ ಪರಿಣಾಮಕಾರಿಯಾಗಿದೆ.
ಮಲೇರಿಯಾವನ್ನು ಗುಣಪಡಿಸಲು ತುಳಸಿ ಸಹಾಯಕವಾಗಿದೆ.
ಅಲೋವೆರಾ
ಅಲೋವೆರಾ ಸೂರ್ಯನ ಕೆಳಗೆ ಚೆನ್ನಾಗಿ ಒಣಗಿದ ಒದ್ದೆಯಾದ ಮಣ್ಣಿನೊಂದಿಗೆ ಬೆಳೆಯುತ್ತದೆ. ಅಲೋವೆರಾವು ಸ್ಯಾಪ್ ಹೀಲಿಂಗ್ ಅನ್ನು ವೇಗಗೊಳಿಸುತ್ತದೆ ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.
ಗಾಯಗಳು, ಕಡಿತ, ಸುಟ್ಟಗಾಯಗಳು, ಉರಿಯೂತ ಹಾಗೂ ಜೀರ್ಣಾಂಗವ್ಯೂಹದ ಸಮಸ್ಯೆಯಲ್ಲಿ ಬಳಸಲಾಗುತ್ತದೆ.
ಧೈಮ್
ಇದು ಹೆಚ್ಚಾಗಿ ಪ್ರಭಲವಾದ ನಂಜುನಿರೋಧಕ ಪ್ರಕೃತಿಗೆ ಹೆಸರುವಾಸಿ. ಗ್ಯಾಸ್ಟ್ರಿಕ್ಟ್ ಸಮಸ್ಯೆಯಲ್ಲಿ, ಕೆಮ್ಮು ನಿವಾರಕವಾಗಿ ಬಳಸಲಾಗುತ್ತದೆ.
ರೋಸ್ಮರಿ
ರೋಸ್ಮರಿ ನಮ್ಮ ಮೆದುಳಿಗೆ ಹೆಚ್ಚು ಆಮ್ಲಜನಕ ತರುವ ಮೂಲಕ ಬುದ್ದಿಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ರ್ಯಾವೆಂಡರ್
ಲ್ಯಾವೆಂಡರ್ ನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಒತ್ತಡ ಮತ್ತು ನಿದ್ರಾಹೀನತೆಯನ್ನು ಶಮನಮಾಡುವಲ್ಲಿ ಸಹಕಾರಿಯಾಗಿದೆ.
ಮೆಂತ್ಯ
ಮೆಂತ್ಯ ಸೊಪ್ಪು ಮತ್ತು ಬೀಜಗಳು ತೂಕ ಹೆಚ್ಚಿಸುವಲ್ಲಿ ಹಾಗೂ ಯಕೃತ್ತಿನ ಕ್ಯಾನ್ಸರ್ ನಿವಾರಣೆಯಲ್ಲಿ, ರಕ್ತದ ಕೊಬ್ಬಿನ ಮಟ್ಟವನ್ನು ತಗ್ಗಿಸುವಲ್ಲಿ ಸಹಕಾರಿಯಾಗಿದೆ.
ಪುದಿನಾ
ಪುದಿನಾವು ವಿಶ್ವದ ಹಳೆಯ ಔಷಧಿಯಗಿದ್ದು, ನಂಜುನಿರೋಧಕವಾಗಿ, ಜ್ವರ ನಿವಾರಣೆಯಲ್ಲಿ, ಬಾಯಿಯ ದುರ್ವಾಸನೆ ನಿವಾರಣೆಯಲ್ಲಿ ಬಳಸುತ್ತಾರೆ.
ಕ್ಯಾಸಿಯಾಟೋರಾ/ ಚಕ್ರಮಂಡ: ಮಳೆಗಾಲದಲ್ಲಿ ಸಾಮಾನ್ಯವಾಗಿ ಹೂ ಬಿಡುವ ಸಸ್ಯವಾಗಿದ್ದು ಇಡೀ ಸಸ್ಯ ವನ್ನು ಭಾರತೀಯ ಸಾಂಪ್ರದಾಯಿಕ ಔಷಧಿಯ ಪದ್ದತಿಯಲ್ಲಿ ಹೆಚ್ಚಾಗಿ ಬಳಸುತ್ತಾರೆ.
ಭೃಂಗರಾಜ
ಸೂರ್ಯಕಾಂತಿ ಕುಟುಂಬಕ್ಕೆ ಸೇರಿದ್ದು ಭಾರತದ ಎಲ್ಲ ಕಡೆ ವಿಪುಲವಾಗಿ ಸಿಗುತ್ತದೆ. ಚರ್ಮದ ಸೋಂಕು, ಹಲ್ಲು ನೋವು ನಿವಾರಣೆಯಲ್ಲಿ ಬಳಸುತ್ತಾರೆ.
ಉಪಸಂಹಾರ
ಮಾನವ ತನ್ನ ಜೀವನದ ಶೈಲಿಯು ಟೆಕ್ನೋ ಅರಿವನ್ನು ಪಡೆಯುತ್ತಿದ್ದು ಪ್ರಾಕೃತಿಕ ಜ್ಞಾನದಿಂದ ಹೊರಗುಳಿಯುತ್ತಿದ್ದಾನೆ. ಗಿಡಮೂಲಿಕೆಗಳು ನೈಸರ್ಗೀಕ ಉತ್ಪನ್ನಗಳಿಂದಾದ್ದರಿಂದ ಅಡ್ಡ ಪರಿಣಾಮಗಳಿಂದ ಮುಕ್ತವಾಗಿದೆ. ಗಿಡಗಳು ಎಲ್ಲಾಕಾಲದಲ್ಲಿ ದೊರಕುವುದರಿಂದ ಎಲ್ಲಾ ಕಾಲದಲ್ಲೂ ಹಲವಾರು ಖಾಯಿಲೆಗಳಿಗೆ ರಾಮಭಾಣವಾಗಿದೆ. ಔಷಧೀಯ ಮೂಲಿಕೆಗಳು ಮಾನವನ ಆಧುನಿಕ ಕೃತ್ಯಗಳಿಂದ ಅಸುರಕ್ಷಿತವಾಗಿದ್ದು ಹಲವಾರು ಔಷಧಿಯ ಸಸ್ಯಗಳು ಈಗಲೆ ಅಳಿವಿನಂಚಿಗೆ ತಲುಪಿವೆ. ಔಷಧೀಯ ಮೂಲಿಕೆಗಳನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿಡುವ ಜವಾಬ್ದಾರಿ ಮಾನವನ ಮೇಲೆ ಇದ್ದು ಸಸ್ಯರಾಶಿಯನ್ನು ಸಂರಕ್ಷಿಸದಿದ್ದರೆ ಮಾನವ ನಾಶ ನಿಶ್ಚಿತ ಎಂದು ಈ ಲೇಖನದ ಮೂಲಕ ತಿಳಿಸುತ್ತಿದ್ದೇನೆ.