ತಾಯಿ ಕೊಡುತ್ತಾಳೆ- ಕವಿ ಬರೆಯುತ್ತಾನೆ
ಚೇತನ ಟಿ
III BSc CBZ 1
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು.
9945387014, chethant86@gmail.com
ತಾಯಿ ಕೊಡುತ್ತಾಳೆ
ತಾಯಿ ಕೊಡುತ್ತಾಳೆ ನಮಗಾಗಿ ಅವಳ ತನುಮನ
ತಂದೆಯ ಬೆಂಬಲ ಜೀವನದಲ್ಲಿ ಸಂಪೂರ್ಣ
ಅವರಿಗೆ ನಾವು ಕೊಡಬೇಕೆಂದ್ರೆ ಚೇತನ
ನಮ್ಮ ಮುಖದಲ್ಲಿ ಇರಬೇಕು ಚೈತನ್ಯ
ಅವಾಗ ಅವರು ಗರ್ವದಿಂದ ಹೇಳ್ತಾರೆ ಆಹಾ ಹೆತ್ವಿ ಎಂತಹ ಮಕ್ಕಳನ್ನ
ಅದು ಗೊತ್ತಾದಗ ನಮಗೆ ಅನಿಸುತ್ತದೆ ನಮ್ಮ ಬಾಳು ಧನ್ಯ
ಇದೆಲ್ಲ ಆಗಬೇಕೆಂದ್ರೆ ಚೆನ್ನಾಗಿ ಸಾಕಬೇಕು ತಂದೆ-ತಾಯಿಯರನ್ನ
ಮಗು ಹುಟ್ಟುತ್ತಾ ಆಗುತ್ತೆ ಅಪೌಷ್ಟಿಕ
ಏಕೆಂದರೆ ಅದಕ್ಕೆ ಸಿಕ್ತಿಲ್ಲ ಉತ್ತಮವಾದ ಪೌಷ್ಟಿಕ
ಇದೆಲ್ಲ ಆಗ್ತಿರೋದು ನಮ್ಮೆಲ್ಲರ ಮೂಲಕ
ಏಕೆಂದ್ರೆ ನಾವು ತಿನ್ತಿಲ್ಲ ಶುಭ್ರವಾದ ಆಹಾರಕ
ಅದ್ರ ಬದ್ಲು ತಿನ್ತಿದ್ದೀವಿ ಚಕ್ಲಿ ನಿಪ್ಪಟ್ಟುಗಳಂತಹ ಕುರುಕ
ಕುಡಿತಿದ್ದೀವಿ ತಂಪುಪಾನೀಯಗಳಂತಹ ಮಾದಕ
ಇದರಿಂದ ನಾವು ಇರೋಕಾಗ್ತಿಲ್ಲ ಸದೃಢವಾಗಿ ದೈಹಿಕ
ಇದರ ಪರಿಣಾಮ ಆಗೋದು ಮುಂದಿನ ಜನಾಂಗಕ್ಕ
ಅದಕ್ಕೆ ನಾವು ತಿನ್ನಬೇಕು ಪೌಷ್ಟಿಕ ಆಹಾರಕ
ಕವಿ ಬರೆಯುತ್ತಾನೆ
ಕವಿ ಬರೆಯುತ್ತಾನೆ ಕವನ
ಅವರಲ್ಲಿರುತ್ತದೆ ವಿಷಯದ ಜ್ಞಾನ
ಅವನ ಕವನದಲ್ಲಿ ಕಾಣುತ್ತಾನೆ ಎಲ್ಲರನ್ನೂ ಸಮಾನ
ಅದಕ್ಕೆ ಎಲ್ಲರೂ ಓದ್ತಾರೆ ಅವನ ಕವನ
ಅರ್ಥವಾದ್ರೆ ಅವನ ಕವನ ಅದೇ ದೊಡ್ಡ ಸನ್ಮಾನ
ಅವಾಗ ಗೆಲ್ತಾನೆ ಎಲ್ಲರ ಮನಸ್ಸನ್ನ
ಆಗ ಅವನ ಜೀವನ ಪಾವನ